
ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,
ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-
ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.
ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!
ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ