ಭಾನುವಾರ, ಜನವರಿ 23, 2011

image

ಒಂದು ಮಧ್ಯರಾತ್ರಿ

ಮಧ್ಯರಾತ್ರಿ ಗಾಡನಿದ್ರೆಯಲ್ಲಿದವನಿಗೆ ದಿಡೀರನೇ ಎಚ್ಚರವಾಯಿತು.ಕೆಟ್ಟಕನಸು-ಮೈಎಲ್ಲಾ ಬೆವರು.ಮಲ್ಲಗೆ ನಿದ್ದೆಗಣ್ಣನ್ನು ತೆರೆದೆ.ಸುತ್ತಲ್ಲೂ ಗಾಡಾಂಧಕಾರ,ಸೊಳ್ಳೆಗಳ ಗುಂಯ್ ನಿನಾಧ.ಚಾರ್ಜಿಗೆ ಇಟ್ಟ ಮೊಬೈಲ್ ಚಾರ್ಜರಿನ ಕೆಂಪು ದೀಪದ ಬೆಳಕು ಮಂದವಾಗಿ ಬೆಳಗುತ್ತಿದ್ದೆ.ಗಡಿಯಾರದ ಟಿಕ್ ಟಿಕ್ ಶಬ್ಧ,ನಾನಿನ್ನೂ ನಿದ್ರಿಸಿಲ್ಲ ಎಂದು ಸಾರುತ್ತಿದೆ.ಸರಿಯಾಗಿ ನಲ್ಲಿ ತಿರುಗಿಸಲ್ಲವೋ ಏನೋ,ಬಚ್ಚಲಿನ ನಲ್ಲಿಯಿಂದ ನೀರು ತೊಟ್ಟುಕುತ್ತಿರುವ ಕೇಳಿ ಬರುತ್ತಿದೆ.ನಾನು ಇನ್ನೂ ಕಾರ್ಯನಿರ್ವಹಿಸುತ್ತಿದ್ದೆನೆ ಎಂದು ಸೊಳ್ಳೆಬತ್ತಿಯು ತನ್ನ ದೂಮ ಮತ್ತು ಕೆಂಪಗಿನ ಕಿಡಿಯನ್ನು ಸಾಕ್ಷಿಯನ್ನು ದೃಷ್ಟಿಗಮ್ಯವಾಗಿಸಿದೆ.ದೂರದಲ್ಲೆಲೋ ಬೀದಿ ನಾಯಿಗಳ ಬೊಗಳುವಿಕೆ ಅಸ್ಪಷ್ಟವಾಗಿ ಕೇಳಿಸುತ್ತಿದೆ.ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿವೆ.ಬೀದಿದೀಪದ ಬೆಳಕು ವಾಹನದ ಗಾಜಿಗೇ ಬಿದ್ದು ಪ್ರತಿಫಲಿಸಿ,ಮನೆಯ ಗೋಡೆಗಳ ಮೇಲೆ ಬೆಳಕು ಬೀಳುತ್ತಿದೆ.ಕಿಟಕಿಯಿಂದ ತಣ್ಣನೆಯ ಗಾಳಿ ಬೀಸಿ ಒಂದು ಕ್ಷಣ ಮೈ ಥರಗುಟ್ಟಿತು.ಹೊದಿಕೆಯನ್ನು ಎಳೆದು ಮುದುಡಿಕೊಂಡು ಕಣ್ಣುಮುಚ್ಚಿದೆ.ನಿದ್ರೆ ಯಾವಾಗ ಆವರಿಸಿತ್ತೋ ತಿಳಿಯಲಿಲ್ಲ.ಬೆಳಿಗ್ಗೆ ಕಣ್ಣು ಬಿಟ್ಟಾಗ ರಾತ್ರಿ ಕಂಡ ದೃಶ್ಯಾವಳಿಗಳು ಕತ್ತಲೆಯೊಂದಿಗೆ ಕರಗಿಹೋದವು

ಓದಿ ನೋಡಿ

'ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರು ಸಂತಸದಿಂದಿರಬಲ್ಲ.' 'ಓದು ಮನುಷ್ಯನಾಗಿ ಮಾಡಿದರೆ,ಬರವಣಿಗೆ ಅವನನ್ನು ಪರಿಪೂರ್ಣನಾಗಿ ಮಾಡುತ್ತದೆ.' ಮೇಲಿನ ಮಹನೀಯರ ನುಡಿರತ್ನಗಳನ್ನು ಕೇಳಿ ನಿಮಗೂ ಪುಸ್ತಕವನ್ನು ಓದಬೇಕು ಎನಿಸಿರಬೇಕು.ಅಥವಾ ನೀವು ಸಹ ಪುಸ್ತಕಪ್ರೇಮಿ ಯಾಗಿರಬಹುದು.ನೀವು ಓದಿದ್ದ ಯಾವುದೋ ಪುಸ್ತಕ ತುಂಬ ಇಷ್ಟವಾಗಿರಬಹುದು.ಆ ಪುಸ್ತಕದ ಬಗ್ಗೆ ನಿಮ್ಮ ಗೆಳೆಯರಿಗೆ ಹೇಳಿ,ಓದಲು ಕೊಟ್ಟಿರಬಹುದು.ಅಥವಾ ಹೇಳಿರಬಹುದು.ಇಲ್ಲಿ ನಾನು ಓದಿ ಇಷ್ಟಪಟ್ಟು ಗೆಳೆಯರಿಗೆ ಓದಲು ಹೇಳಿದ ಪುಸ್ತಕಗಳ ಹೆಸರುಗಳನ್ನು ಕೊಟ್ಟಿದ್ದೇನೆ.ಇವುಗಳಲ್ಲಿ ನೀವು ಓದಿರುವ ಪುಸ್ತಕಗಳು ಇರಬಹುದು.ನೀವು ಓದಿದ್ದ,ಇಷ್ಟಪಟ್ಟ ಪುಸ್ತಕಗಳ ಬಗ್ಗೆ ಹಂಚಿಕೊಳ್ಳಬಹುದು. ಕುವೆಂಪು: ಕಾನೂರು ಹೆಗ್ಗಡತಿ. ಮಲೆಗಳಲ್ಲಿ ಮದುಮಗಳು. ನೆನಪಿನ ದೋಣಿಯಲ್ಲಿ. ಸ್ವಾಮಿ ವಿವೇಕಾನಂದ. ಮಲೆನಾಡಿನ ಚಿತ್ರಗಳು. ಕಥನ ಕವನಗಳು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ: ಕರ್ವಾಲೋ, ಚಿದಂಬರ ರಹಸ್ಯ. ಜುಗಾರಿ ಕ್ರಾಸ್. ಕಿರಗೂರಿನ ಗಯ್ಯಾಳಿಗಳು. ಅಬಚೂರಿನ ಪೋಸ್ಟಾಪೀಸು. ಮಾಯಾಲೋಕ. ಮಿಸ್ಸಿಂಗ್ ಲಿಂಕ್. ಪಾಕಕ್ರಾಂತಿ ಮತ್ತು ಇತರ ಕಥೆಗಳು. ವಿಮರ್ಶೆಯ ವಿಮರ್ಶೆ. ಪ್ಲೇಯಿಂಗ್ ಸಾಸರ್. ಪರಿಸರದ ಕಥೆ. ತಾ.ರಾ.ಸು: ದುರ್ಗಾಸ್ತಮಾನ. ರಕ್ತರಾತ್ರಿ. ತಿರುಗುಬಾಣ. ಕಸ್ತೂರಿಕಂಕಣ. ಚಂದವಳ್ಳಿಯ ತೋಟ. ಹಿಂತಿರುಗಿ ನೋಡಿದಾಗ. ಗಿರಿಮಲ್ಲಿಗೆ. ಮರಳುಸೇತುವೆ. ನಾಗರಹಾವು. ಕಂಬನಿಯ ಕುಯಿಲು. ಹೊಸಹಗಲು. ವಿಜಯೋತ್ಸವ. ತ.ರಾ.ಸುರವರ ಸಮಗ್ರ ಕಥೆಗಳು. ಯು.ಆರ್.ಅನಂತಮೂರ್ತಿ: ಸಂಸ್ಕಾರ. ಶಿವರಾಮ ಕಾರಂತ: ಮೂಕಜ್ಜಿಯ ಕನಸು