ಶುಕ್ರವಾರ, ಜನವರಿ 21, 2011

ಕವನ:ಕವಿಗಾಗಿ

ಕಣ್ಣ ಸೆಳೆವ ಪಚ್ಚೆ ಹಸಿರು ಕವಿಗಾಗಿ, ಕಿವಿ ನಿಮಿರುವ ಪಕ್ಷಿಗಾನ ಕವಿಗಾಗಿ. ಮೂಗ ಸೆಳೆವ ಹೂ ಸುಗಂಧ ಕವಿಗಾಗಿ.ಜಗವ ಮರೆಸೋ ಜೇನ ಸವಿಯು ಕವಿಗಾಗಿ. ತಂಪ ನೀವ ತಂಗಾಳಿಯ ಸ್ಪರ್ಶ ಕವಿಗಾಗಿ. ಮನ ತಣಿಸುವ ಸೋನೇಮಳೆಯು ಕವಿಗಾಗಿ. ಕವಿಯಿಂದಲೇ ಜಗದಿ ಮಳೆಯು ಕವಿಯಿಂದಲೇ ಜಗದಿ ಬೆಳೆಯು ಕವಿಯಿದ್ದರೆ ಜಗಕ್ಕೆ ಬೆಳೆಯು, ಕವಿಯಿದ್ದರೆ ಜಗಕ್ಕೆ ಬೆಲೆಯು. -ನಂದೀಶ್ ಬಂಕೇನಹಳ್ಳಿ

ಕವನ:ಬಾ ಮಲೆನಾಡಿಗೆ




ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,

ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-

ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ