ಶುಕ್ರವಾರ, ಜನವರಿ 21, 2011

ಕವನ:ಬಾ ಮಲೆನಾಡಿಗೆ




ಬಾ ಮಲೆನಾಡಿನ ಸಿರಿ ದರ್ಶನಕ್ಕೆ,
ರವಿ ಏರುವ,ಮಂಜಾರುವ,

ಹೂ ಬಿರಿಯುವ ಶುಭಕಾಲಕ್ಕೆ.
ಕೋಗಿಲೆ ಇಂಚರ,ನಾಟ್ಯಮನೋಹರ-

ನವಿಲಾಟದ ಸುಂದರ ನೋಟಕ್ಕೆ.
ತೆನೆ ತೂಗುವ,ತೊರೆ ಜಾರುವ
ಜುಳುನಾದದ ಸವಿರಾಗಕ್ಕೆ.

ಸಿಹಿಜೇನಿದೆ,ಸವಿ ಫಲವಿದೆ,
ಬಾ ಸ್ವೀಕರಿಸು ಓ ಅಥಿತಿಯೇ!

ಕಾಫಿಯ ಕಂಪಿದೆ,ಹೊಂಗೆಯ ತಂಪಿದೆ,
ಬಾ ಬೆಟ್ಟದ ಪೇಯದಾಸ್ವದಕ್ಕೆ.
ಬಾ ಮಲೆನಾಡಿನ ಸಿರಿ ದರ್ಶನಕ್ಕೆ.
-ನಂದೀಶ್ ಬಂಕೇನಹಳ್ಳಿ

ಕಾಮೆಂಟ್‌ಗಳಿಲ್ಲ: