ಶನಿವಾರ, ಜನವರಿ 22, 2011

ಚಿತ್ರ-ಕವನ

ಒಂದು ಒಣಗಿದ್ದ ಮರ.ಅದರ ಪಕ್ಕದಲ್ಲಿ ಎತ್ತುಗಳಿಲ್ಲದ ಗಾಡಿ.ಹಿಂಬದಿಯಲ್ಲಿ ಕೆರೆ.ಅದರ ಆ ತೀರದಲ್ಲಿ ದಟ್ಟ ಕಾನನ.ಮೇಲೆ ಶುಭ್ರ ನೀಲಾಕಾಶ.ಒಣಮರದ ಸುತ್ತಲ್ಲೂ ಒಣಗಿದ್ದ ಗಿಡಗಂಟಿಗಳು:ಈ ಚಿತ್ರವನ್ನು ನೋಡಿ ರಚಿಸಿದ ಕವನ ಈ ಕೆಳಗಿನದು: ಒಣಮರಕ್ಕೆ ಆಗಿದೆ ನೀರಡಿಕೆ. ಹಿನ್ನಲೆಯಲ್ಲಿ ಇದೆ ನೀರ ಒರತೆ. ತುರ್ತಾಗಿ ಸಿಗಬೇಕಾಗಿದೆ ಮರಕ್ಕೆ ಚಲನೆ; ಅಥವಾ ಇರಲೇಬೇಕು ಅಪಾರ ಸಹನೆ. ನೀರು ಏರಿ ಬಾನ ಸೇರಿ ಮತ್ತೆ ಜಾರಿ ಭುವಿಯ ಸೇರೋವರೆಗಿನ ತಾಳ್ಮೆ. ಎತ್ತಿಲ್ಲದ ಗಾಡಿಯು ತಂದಿದೇ ಚಲನೆಯ ಚಪಲ. ಆಚೆ ತೀರದ ಹಸಿರು ಕೆಡಿಸಿದೇ ತಾಳ್ಮೆ. ಗಾಡಿ ಚಲನೆ ಕಳೆದು ಮೂಲೆ ಸೇರಿದೆ. ನಿಂತ ಮರವೂ ಚಲನೆಗಾಗಿ ಕೊರಗೆ ಕೊರಗಿದೆ. ಎತ್ತಿನಗಾಡಿಗೆ ಬರಲಿ ಜೋಡಿಎತ್ತು, ಕೊರಳಗಂಟೆಯ ಸದ್ದು ತರಲಿ ಮರುಜೀವ. ಬೇಗ ಬಾರಯ್ಯ ವರುಣ, ಇರಲಿ ಜೀವದ ಮೇಲೆ ಕರುಣ

ತೋಚಿದ್ದು-ಗೀಚಿದ್ದು

ಬರಸಿಡಿಲೇ ಬಡಿಯಲಿ ಬಿರುಮಳೆಯೇ ಸುರಿಯಲಿ. ಅಗ್ನಿದೇವ ರುದ್ರನಾಗಿ ಅಗ್ನಿವೃಷ್ಟಿ ಸುರಿಸಲಿ. ಸಪ್ತಸಾಗರವೇ ಕದಡಿ ಕೆರಳಿ, ಲೋಕವೆಲ್ಲ ಮುಳುಗಲಿ, ಜಗವೇ ಕೆರಳಿ ಏನೇ ಬರಲಿ ದಿಟ್ಟಗುರಿಯು ನಿನ್ನದಾಗಲಿ

ಪೂರ್ಣಚಂದ್ರ ಮತ್ತು ಗಂಧರ್ವನಗರಿ

ಅದೊಂದು ಮಹಾನಗರ.ಆಧುನಿಕ ವೈಭವಗಳನ್ನು ಹೊದ್ದು ಮಲಗಿದ್ದ ನಗರ.ಝಗಮಗಿಸುವ ಬೀದಿ,ಚಿತ್ರವಿಚಿತ್ರ ಆಕಾರದ,ಬಣ್ಣಬಣ್ಣದ ವಾಹನಗಳು ಅಷ್ಟೇ ವಿಚಿತ್ರ ಶಬ್ದ ಮಾಡುತ್ತಾ ಶರವೇಗದಿಂದ ಚಲಿಸುತ್ತಿವೆ.ಸುತ್ತಲೂ ಗಗನಚುಂಬಿತ ಕಟ್ಟಡಗಳು.ಅಲ್ಲಲ್ಲಿ ನಿಂತ ಮಂದಿಯ ಬಳಿಯಿಂದ ಕೇಳಿ ಬರುತ್ತಿರುವ ಗಜಿಬಿಜಿ ಮಾತುಗಳು.ಅಬ್ಪಾ ಇದೇನು ಗಂದರ್ವಲೋಕವೇ ಧರೆಗಿಳಿದಂತಿದೆಯಲ್ಲ.ಅಗೋ! ಅಲ್ಲಿ ದೂರದ ಮಂಟಪ ಮಿಣುಕುದೀಪಗಳಿಂದ ಜಗಮಗಿಸುತ್ತಿದೆ.ಹಸಿರು,ಕೆಂಪು,ನೀಲಿ,ಹಳದಿ ಇನ್ನೂ ಹಲವಾರು ತರತರದ ಬಣ್ಣಗಳು.ಹೌದು! ಇದು ಬಣ್ಣಗಳದೇ ಲೋಕ.ಅಯ್ಯೋ ಇದೇನಾಯ್ತು?. ಇಡೀ ನಗರವೇ ಕರಗಿಹೋದಂತೆ ತೋರುತ್ತಿದೆಯಲ್ಲ.ಹೌದು ಇಲ್ಲಿ ಎಲ್ಲವೂ ಕೃತಕ.ಕ್ಷಣಿಕವೂ ಕೂಡ.ಒಂದು ಕ್ಷಣ ವಿದ್ಯುತ್ ಕೈಕೊಟ್ಟರೂ ಇಲ್ಲಿಯ ಬದುಕೇ ತಟಸ್ಥವಾದಂತೇ.ಒಂದು ನಿಮಿಷದ ಹಿಂದೆ ಕಂಡ ಸೊಬಗು ಹೀಗೆಲ್ಲಿ ಕರಗಿಹೋಯಿತು.ಅಥವಾ ಇದು ಬರೀ ಕನಸೇ? ಇರಲಾರದು.ಹೋ ಅದೋ ಆಗಸದಿ ಆ ಚಂದ್ರ ಅದೆಷ್ಟು ತೇಜೋಮಯನಾಗಿದ್ದಾನೆ.ಅರೇ ಚುಕ್ಕಿಗಳು!ಇಷ್ಟುಹೊತ್ತು ಇವೆಲ್ಲಿದವು?.ಅಥವಾ ಇದೂ ಸಹ ಕನಸೇ ಇರಲಿಕ್ಕಿಲ್ಲ.ಆದರೆ ಆ ಚಂದ್ರ ಈ ಕೃತಕ ಗಂದರ್ವನಗರಿಗಿಂತ ಸುಂದರ,ಸಹಜ.ಇಷ್ಟು ದಿನ ನಾನೇಕೆ ಈ ಸೊಬಗನ್ನು ಕಾಣಲಿಲ್ಲ?.ಆಸ್ವಾದಿಸಲಿಲ್ಲ?.ಅದೋ! ಶಶಿಯ ಬೆಳದಿಂಗಳಲ್ಲಿ ನಗರ ಅದೆಷ್ಟು ಮನೋಹರವಾಗಿ ಗೋಚರಿಸುತ್ತಿದೆ.ಅಯ್ಯೋ ಇದೆನಾಯ್ತು ವಿದ್ಯುತ್ ಬಂದೇ ಬಿಟ್ಟಿತ್ತಲ್ಲ.ಅದಕ್ಕೇನು ಅವಸರವಿತ್ತು?

ಓ ದೇವ ನೀ ಬೇಗ ಬಾ

ಮಣ್ಣಾಟವಾಡುವ ಕಂದನ ಕಂಡು
ಅಮ್ಮನ್ನು ತಾ ಬಂದು ಹುಸಿಏಟು ಕೊಡುವಂತೆ,
ತಿದ್ದಿ ನೆಡೆಸಲು
ಓ ದೇವ ನೀ ಬೇಗ ಬಾ

ಪ್ರಾಣ ಹಿಂಡುವ ಮಂದಿ
ರಕ್ತ ಹೀರುವ ಮಂದಿ
ಎಲ್ಲ ಮಂದಿಯ ಮನದಿ
ಮಾನವೀಯತೆಯ ಕಿಡಿಯ ನೀ ಹಚ್ಚು ಬಾ
ಓ ದೇವ ನೀ ಬೇಗ ಬಾ

ಅಂದು ಭಕ್ತಿ ಮಾರ್ಗದಿ ನಿನ್ನ
ನಾಮ ಸ್ಮರಣೆಯ ಮಾಡಿ
ಮುಕ್ತಿ ತೋರೋ ಎಂದು ಭಜಿಸುತಲಿರೇ
ಇಂದು ಜಾತಿ,ಪಕ್ಷವು ನಿನ್ನ
ನಾಮವನೇಳಿ ಸರ್ವನನ್ನು ಅಲ್ಪನಾಗಿಸುತಿಹರು.

ಹೆಸರೊಂದೆ ಸಾಕೀಗ,ಭಕ್ತಿಗಿಲ್ಲವೋ ಜಾಗ
ಎಂಬ ಹುಂಬರೆದೆಯಲ್ಲಿ
ಭಕ್ತಿಜ್ಯೋತಿಯ ಹಚ್ಚಲು
ಓ ದೇವ ನೀ ಬೇಗ ಬಾ

ನಿನ್ನಯ ಕಂದರು ನಾವೆಲ್ಲ
ಕುರುಡರಂದದ್ದಿ ನಿನ್ನ ಹುಡುಕುತಿರುವೆವಲ್ಲ.
ನೀ ಬರಲು ಪ್ರಶ್ನೆಗಳೇ ಇಲ್ಲ.
ಆಸ್ತಿಕರ ನಾಸ್ತಿಕರ ಜಗಳವದು ನಿಂತಿಲ್ಲ.
ಆದಷ್ಟು ಬೇಗ ನೀ ಬರಬೇಕಲ್ಲ.
ಓ ದೇವ ನೀ ಬೇಗ ಬಾ.

ಬಾವಿಯೊಳಗಿನ ಕಪ್ಪೆಯ ರೀತಿ
ನಮ್ಮ ವ್ಯಾಪ್ತಿಯಲ್ಲಿ ನಿನ್ನ ಹುಡುಕುತಿರುವೆವು.
ಹಲವು ಗೊಂದಲದ ನಡುವೆ
ಬಾಳುತಿರುವ ಮಂದಿಯ ಮುಂದೊಮ್ಮೆ ನೀ ನಿಲ್ಲು ಬಾ.

ಭಕ್ತಿಯು ಹಣವಾಗಿ,ಪ್ರೀತಿಯು ಹಣವಾಗಿ
ಅಕ್ಷರವ ಹಣವಾಗಿ ಕಾಣುವ ಜನರ
ಸರಿದಾರಿಯಲ್ಲಿ ನಡೆಸು ಬಾ
ಓ ದೇವ ನೀ ಬೇಗ ಬಾ

ಗತಿಗೆಟ್ಟವರು ಇಲ್ಲಿ ಹಲವಾರು ಮಂದಿ
ಉಳ್ಳವರ ದರ್ಪಕ್ಕೆ ಅವರೆಲ್ಲ ಬಂದಿ
ಎಲ್ಲರುದಾರಕ್ಕೆ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ವಿಜ್ಞಾನದ ಆವೇಗದಲ್ಲಿ ಯಂತ್ರಗಳ ಸಂತೆ
ಬದುಕಾಗಿದೆ ಇಲ್ಲಿ ನಿರ್ಜೀವ ಯಂತ್ರದಂತೆ
ಎಲ್ಲವೂ ಜಡವಾಗಿ ತೋರುತಿರೇ
ಜೀವಸ್ಪರ್ಶವ ನೀಡೇ ನೀ ಬೇಗ ಬಾ
ಓ ದೇವ ನೀ ಬೇಗ ಬಾ

ಹೇಮಾವತಿ

ಹೊಂಬಿಸಿಲ ಹೊಳಪಲಿ ಜುಳುನಾದದ ಜೊಂಪಲಿ ತುಂಬಿ ಹರಿವಳು ನುಣ್ಣಗೆ ಮಲೆಯ ಮೇಲ್ಗಡೆ ಬೀಸುಗಾಳಿಯು ತಣ್ಣಗೆ ದಡದ ಸಂಪಿಗೆ,ಗಂಧ ಕಂಪಿಗೆ,ದುಂಬಿಗಾನದ ಇಂಪಿದೆ ಮಲೆಯ ಮಕ್ಕಳ ನೀರ ಆಟ ಬಟ್ಟೆ ಒಗೆಯುವ ಹೆಂಗಳೆಯರ ಕೂಟದ ನಗುವು ಎಲ್ಲೆಡೆ ಪ್ರತಿಫರಿಸಿದೆ. ಗಾಳವಿಕ್ಕಿ ಕಾದು ಕುಳಿತ ದನಗಾಯಿಯ ಮೊಗದಲಿ ತತ್ವಜ್ಞಾನಿಯ ಹೊಳಪಿದೆ.

ಅ'ಗಣಿತ'

ಎಣಿಸುವುದು ಗಣಿತ ಎಣಿಸಲಾಗದು ಅಗಣಿತ