ಶನಿವಾರ, ಜನವರಿ 22, 2011

ಚಿತ್ರ-ಕವನ

ಒಂದು ಒಣಗಿದ್ದ ಮರ.ಅದರ ಪಕ್ಕದಲ್ಲಿ ಎತ್ತುಗಳಿಲ್ಲದ ಗಾಡಿ.ಹಿಂಬದಿಯಲ್ಲಿ ಕೆರೆ.ಅದರ ಆ ತೀರದಲ್ಲಿ ದಟ್ಟ ಕಾನನ.ಮೇಲೆ ಶುಭ್ರ ನೀಲಾಕಾಶ.ಒಣಮರದ ಸುತ್ತಲ್ಲೂ ಒಣಗಿದ್ದ ಗಿಡಗಂಟಿಗಳು:ಈ ಚಿತ್ರವನ್ನು ನೋಡಿ ರಚಿಸಿದ ಕವನ ಈ ಕೆಳಗಿನದು: ಒಣಮರಕ್ಕೆ ಆಗಿದೆ ನೀರಡಿಕೆ. ಹಿನ್ನಲೆಯಲ್ಲಿ ಇದೆ ನೀರ ಒರತೆ. ತುರ್ತಾಗಿ ಸಿಗಬೇಕಾಗಿದೆ ಮರಕ್ಕೆ ಚಲನೆ; ಅಥವಾ ಇರಲೇಬೇಕು ಅಪಾರ ಸಹನೆ. ನೀರು ಏರಿ ಬಾನ ಸೇರಿ ಮತ್ತೆ ಜಾರಿ ಭುವಿಯ ಸೇರೋವರೆಗಿನ ತಾಳ್ಮೆ. ಎತ್ತಿಲ್ಲದ ಗಾಡಿಯು ತಂದಿದೇ ಚಲನೆಯ ಚಪಲ. ಆಚೆ ತೀರದ ಹಸಿರು ಕೆಡಿಸಿದೇ ತಾಳ್ಮೆ. ಗಾಡಿ ಚಲನೆ ಕಳೆದು ಮೂಲೆ ಸೇರಿದೆ. ನಿಂತ ಮರವೂ ಚಲನೆಗಾಗಿ ಕೊರಗೆ ಕೊರಗಿದೆ. ಎತ್ತಿನಗಾಡಿಗೆ ಬರಲಿ ಜೋಡಿಎತ್ತು, ಕೊರಳಗಂಟೆಯ ಸದ್ದು ತರಲಿ ಮರುಜೀವ. ಬೇಗ ಬಾರಯ್ಯ ವರುಣ, ಇರಲಿ ಜೀವದ ಮೇಲೆ ಕರುಣ

ಕಾಮೆಂಟ್‌ಗಳಿಲ್ಲ: