ಗುರುವಾರ, ಫೆಬ್ರವರಿ 24, 2011

ಕವಿಯು-ಚೆಲುವು

ವನಸಿರಿಯ ಚೆಲುವ ಕಂಡು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು, ಕವಿಯು ಬರೆದ ಕವಿತೆಯ. ಮಧುವ ಹೀರುವ ದುಃಬಿಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೇ ಎನುತ್ತಾ ಹೆಸರ ಹೇಳದೇನೇ ಹೊರಟು ಹೋದನು. ಕವಿತೆಯನ್ನು ತೊದಲಿ ಓದಿ, ಮತ್ತೆಮತ್ತೆ,ಹಾಡಿ-ಪಾಡಿ, ಅರ್ಥಕಾಡೇ,ಎಂಥ ಅದ್ಬುತ!, ಹೊರಟುಹೋದ ಕವಿಯು ಬಂದ, ಹೃದಯದೊಳಗೆ ಬಂದು ನಿಂದ. ಸುಮದೊಳೀಗ ಎಷ್ಟು ಬಣ್ಣ, ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.
ನೆನಪಿನ ಚಿತ್ರಗಳು,ನಂದೀಶ,ನಂದೀಶ್ ಮೂಡಿಗೆರೆ,nenapina chitragalu,nandish,nandish mudigere

ಭಾಗ್ಯವೆಂದರೇ ನಿನ್ನದೇ ಬಿಡು

ಓ ಮರಿಹಕ್ಕಿಯೇ ಭಾಗ್ಯವೆಂದರೇ ನಿನ್ನದೇ ಬಿಡು. ತೋಟದಿಂದ ತೋಟಕ್ಕೆ, ಮರದಿಂದ ಮರಕ್ಕೆ, ಕೊಂಬೆಯಿಂದ ಕೊಂಬೆಗೆ ಹಾರಿ, ಬಗೆಬಗೆಯ ಹೂಮಕರಂಧವ ಹೀರಿ, ಅಡೆತಡೆಯಿಲ್ಲದೇ ಏರಿಳಿಯುವ; ಭಾಗ್ಯವೆಂದರೇ ನಿನ್ನದೇ ಬಿಡು. ದೇಶಕಾಲದ ಪರಿವೇ ಇಲ್ಲದೇ, ಗಡಿ,ಗಡಿಯಾರದ ಕಡಿವಾಣವೇ ಇಲ್ಲದೇ, ಜಾತಿ ಧರ್ಮದ ಗೊಡವೆಯೇ ಇಲ್ಲದ ಭಾಗ್ಯವೆಂದರೇ ನಿನ್ನದೆ ಬಿಡು.

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿ!

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ,ಪ್ರತಿದಿನ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತಿವೆ.ಹಗರಣಗಳನ್ನು ಸಮರ್ಥಿಸುವ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.ಅಲ್ಲಿ ಸಾಕ್ಷ್ಯ ಕಣ್ಣಿಗೆ ಕಟ್ಟುವಂತಿದರೂ ಸಹ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು,ಹಿಂದೆ ನಡೆದ ಹಗರಣಗಳತ್ತ ಬೊಟ್ಟು ಮಾಡಿ,ತಮ್ಮ ತಟ್ಟೆಯಲ್ಲಿ ಬಿದ್ದ ಹೆಗ್ಗಣವನ್ನು ಹೆಗ್ಗಣವಲ್ಲ ಎಂದು ನಂಬಿಸಲು ಹೊರಟಿದ್ದಾರೆ.ಇವರೇನ್ನೂ ಜನಗಳನ್ನು ಮೂರ್ಖರೆಂದು ತಿಳಿದಿದ್ದಾರೆಯೇ?.ಕಣ್ಣಮುಂದೆಯೇ ಅನ್ಯಾಯ ತಂಡಾವವಾಡುತ್ತಿದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಾಮಾನ್ಯನಿದ್ದರೆ, ನಾಡಿನ ರಕ್ಷಣೆಗೆ ಮುಂದಾಗುವ ಪ್ರಾಮಾಣಿಕ ನಾಯಕರ ಕೊರತೆ ಮತ್ತೊಂದೆಡೆ.ಈ ಸಂದರ್ಭದಲ್ಲಿ ಬುದ್ದಿಜೀವಿಗಳು,ಕನ್ನಡ ಹೋರಾಟಗಾರರು,ಮೌನವಹಿಸಿರುವುದು ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳುವಂತೇ ಮಾಡಿದೆ.ಜನರು ತಮ್ಮ ಪ್ರಜಾಶಕ್ತಿಯನ್ನು ಅರಿತು ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತುವ ಅಗತ್ಯವಿದೆ.