ಗುರುವಾರ, ಫೆಬ್ರವರಿ 24, 2011

ಕವಿಯು-ಚೆಲುವು

ವನಸಿರಿಯ ಚೆಲುವ ಕಂಡು, ಮಲೆಯ ಅಲೆಯ ಸ್ಪರ್ಶ ಪಡೆದು, ಕಾಡುಕಣಿವೆ ತಂಪು ಕುಡಿದು, ಕವಿಯು ಬರೆದ ಕವಿತೆಯ. ಮಧುವ ಹೀರುವ ದುಃಬಿಕಂಡು, ಜೇನಸವಿಯ ಸಿಹಿಯ ಉಂಡು, ಹೊಂಗೆ ಮರಕ್ಕೆ ಒರಗಿಕೊಂಡು, ಕವಿಯು ಬರೆದ ಕವಿತೆಯ. ಕವಿತೆ ಎನಗೆ ಕೊಟ್ಟ ಕವಿಯು, ಓದಿ ಜಗವ ಸವಿಯೇ ಎನುತ್ತಾ ಹೆಸರ ಹೇಳದೇನೇ ಹೊರಟು ಹೋದನು. ಕವಿತೆಯನ್ನು ತೊದಲಿ ಓದಿ, ಮತ್ತೆಮತ್ತೆ,ಹಾಡಿ-ಪಾಡಿ, ಅರ್ಥಕಾಡೇ,ಎಂಥ ಅದ್ಬುತ!, ಹೊರಟುಹೋದ ಕವಿಯು ಬಂದ, ಹೃದಯದೊಳಗೆ ಬಂದು ನಿಂದ. ಸುಮದೊಳೀಗ ಎಷ್ಟು ಬಣ್ಣ, ಹೊಂಗೆ ನೆರಳು ಎನಿತು ಚೆನ್ನ. ಕವಿಯು ತಾನು ಜಗವ ಕಂಡು ಕವಿತೆ ಗೀಚಿದ. ನಾನು ಕವಿತೆ ಓದಿಕೊಂಡು ಜಗವ ಕಂಡೆನು.

ಕಾಮೆಂಟ್‌ಗಳಿಲ್ಲ: