ಶುಕ್ರವಾರ, ಜನವರಿ 28, 2011

ಕವಿ

ಏಳುಬೀಳಿನ ಬದುಕ ಕಥೆಯಾಗಿ ಚಿತ್ರಿಸುವವನು.
ಕಥೆಯನ್ನೆ ಬದುಕಾಗಿಸಿಕೊಂಡವನು.
ವಾಸ್ತವವ ಕಲ್ಪಿಸಿಕೊಳ್ಳುವವನು.

ಕಲ್ಪನೆಯ ವಾಸ್ತವಿಕರಿಸುವನು.
ತನ್ನ ಭಾವಗಳ ಜಗಕ್ಕೆ ಹಂಚುವನು.
ಜಗದ ಭಾವನೆಯ ತನ್ನದೆಂದುಕೊಂಡವನು.

ಏಕಾಂತ ಮೌನದಲಿ ನಿತ್ಯ ವಿಹರಿಸುವನು.
ಭಾವಗಳ ಜೊತೆಗೂಡಿ ಹರಟೆ ಹೊಡೆಯುವನು.
ಅಲೆವ ಭಾವನೆಗೆ ರೂಪ ಕೊಟ್ಟವನು.

ನಿದ್ರೆಯಲ್ಲಿ ಮೈಮರೆತು ಮಲಗಿದ್ದರೇನಂತೆ,
ಕವಿಯೊಳಗಿನ ಕವಿ ಮಾತ್ರ ಎಚ್ಚರವೇ ಇರುವನು.

ಕಾಮೆಂಟ್‌ಗಳಿಲ್ಲ: