ಶನಿವಾರ, ಮೇ 6, 2023

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ ರ‍್ಯಾಲಿ, ಬಹಿರಂಗ ಸಭೆ

ಶ್ರಮಿಕ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ, ಸಿಪಿಐ ಅಭ್ಯರ್ಥಿ ಗೆಲ್ಲಿಸಿ

ಮೂಡಿಗೆರೆಯಲ್ಲಿ ಸಿಪಿಐ ಪಕ್ಷದ  ರ‍್ಯಾಲಿ, ಬಹಿರಂಗ ಸಭೆ

ಕೊಟ್ಟಿಗೆಹಾರ:ಶ್ರಮಿಕ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಪಕ್ಷವನ್ನು ಬೆಂಬಲಿಸಿ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದು ಕೇರಳ ರಾಜ್ಯ ಸಭಾ ಸದಸ್ಯರಾದ ಸಂತೋಷ್‌ಕುಮಾರ್ ಹೇಳಿದರು.
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಪರ ಮತಯಾಚನೆ, ಬಹಿರಂಗ ಸಭೆ ಮತ್ತು ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿಗೂ ಕೂಡ ಬಹುತೇಕ ಕಾರ್ಮಿಕ ವರ್ಗ ಸ್ವಂತ ಸೂರಿಲ್ಲದೇ ಬದುಕು ನಡೆಸುತ್ತಿದ್ದೆ. ಬಡವರ್ಗದ ಮೂಲಭೂತ ಸವಲತ್ತುಗಳಲ್ಲಿ ಒಂದಾದ ಸ್ವಂತ ಸೂರನ್ನು ಕಲ್ಪಿಸಲು ಬಿಜೆಪಿ ಸರ್ಕಾರ ಸೋತಿದ್ದು ಬಿಜೆಪಿ ಸರ್ಕಾರ ಉಳ್ಳವರ, ಶ್ರೀಮಂತರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಜನತಾ ಪಾರ್ಟಿಯೂ ಬಿಸಿನೆಸ್ ಜನತಾ ಪಾರ್ಟಿಯಾಗಿದೆ. ಬಡವರ್ಗದ ಅಭಿವೃದ್ದಿಗೆ ಸಿಪಿಐ ಪಕ್ಷ ಹಲವಾರು ಹೋರಾಟಗಳನ್ನು ಹಿಂದಿನಿಂದಲೂ ಸಂಘಟಿಸುತ್ತಾ ಬಂದಿದೆ. ಬಡವರ್ಗದ, ಶೋಷಿತ ವರ್ಗದ ಏಳಿಗೆಗೆ ಸಿಪಿಐ ಕಂಕಣಬದ್ದವಾಗಿದೆ ಎಂದರು.
ಸಿಪಿಐ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಸಿದ್ದನಗೌಡ ಪಾಟೀಲ್ ಮಾತನಾಡಿ ದುಡಿಯುವ ಜನರ ಪರವಾಗಿ ಧ್ವನಿ ಎತ್ತದೇ ಇರುವುದರಿಂದ ಬಡವರ ವಿರೋಧಿ ಕಾನೂನುಗಳು ಬರುವಂತಾಗಿದೆ. ಬಡಜನರು ಸೂರು ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡಿಸಲು ಮುಕ್ತ ಭರವಸೆ ನೀಡಿದ್ದ ಬಿಜೆಪಿ ಭರವಸೆಗೆ ಸೀಮಿತವಾಗಿದೆ ಎಂದರು.
ಸಿಪಿಐ ಪಕ್ಷದ ಬ್ಯಾಂಕ್ ಖಾತೆಯಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಹಣ ಇಲ್ಲ. ಸಿಪಿಐ ಬಡವರ ಸ್ವಾಭಿಮಾನದ ಪಕ್ಷವಾಗಿದೆ. ಮೂಡಿಗೆರೆ ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು ಅವರು ಬಡತನದ ಹಿನ್ನಲೆಯಿಂದ ಬಂದವರು. ಬಡವರ ಪರವಾದ ಧ್ವನಿಯಾಗಿರುವ ರಮೇಶ್ ಕೆಳಗೂರು ಅವರನ್ನು ಗೆಲ್ಲಿಸಬೇಕಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್, ಸಿಪಿಐ ಅಭ್ಯರ್ಥಿ ರಮೇಶ್ ಕೆಳಗೂರು, ಸಿಪಿಐ ಮುಖಂಡರಾದ ಲಕ್ಷö್ಮಣಕುಮಾರ್, ಜ್ಯೋತಿ, ಸಂತೋಷ್, ಗುಣಶೇಖರ್, ಶೇಖರ್, ಅಮ್ಜದ್ ಮುಂತಾದವರು ಇದ್ದರು.

ಕಾಮೆಂಟ್‌ಗಳಿಲ್ಲ: