ಬುಧವಾರ, ಏಪ್ರಿಲ್ 18, 2012

ಕಥೆ;ಪ್ಯಾಟೆ4

ಮಂಜ ತುಂಬಾ ದೂರ ಬಂದ ನಂತರ ಕ್ಯಾಂಟಿನಿನ ಕಾಕನಿಗೆ ಹೇಳದೇ ಬಂದದ್ದು ನೆನಪಾಯಿತು.ಕತ್ತಲೆಯಲ್ಲಿ ಸಮಯ ಅಂದಾಜು ಮಾಡಲಾಗಲಿಲ್ಲ.ಆದರೆ ತಾನು ಹೊರಟು ತುಂಬ ಹೊತ್ತಾಗಿರುವುದು ತಿಳಿಯಿತು.ಹಿಂದಿರುಗಿ ಹೋಗುವುದೆಂದು ನಿರ್ಧರಿಸಿ ಬೇಗ ಬೇಗ ನಡೆಯತೊಡಗಿದ.ಬೀದಿಬದಿಯ ಪಾನಿಪೂರಿ,ಗೋಬಿಮಂಚೂರಿ ಗಾಡಿಗಳು ಅಂದಿನ ಕೆಲಸ ಮುಗಿಸಿ ಮನೆಯ ಕಡೆಗೆ ಸಾಗುತ್ತಿದ್ದವು.ಬರಬರುತ್ತಾ ವಾಹನಗಳ ಓಡಾಟ ಕಡಿಮೆಯಾಗಿ ಬಣ್ಣಬಣ್ಣದ ದೀಪಗಳಿಂದ ಜಗಮಗಿಸುವ ಅಂಗಡಿಮುಂಗಟುಗಳು ಬಾಗಿಲು ಹಾಕಿ ಬೋಳುಬೋಳಾಗಿ ಕಾಣತೊಡಗಿತ್ತು.ಬೀದಿದನಗಳು ರಸ್ತೆಯ ಮೇಲೆ ಮಲಗಿ ಮೆಲುಕು ಹಾಕತೊಡಗಿದವು.ಒಟ್ಟಿನಲ್ಲಿ ಗಂಧರ್ವಲೋಕದ ತುಣುಕೊಂದರಂತೇ ಕಂಡ ಪ್ಯಾಟೆ ಖಾಲಿಖಾಲಿಯಾಗಿ ಕಾಣತೊಡಗಿತ್ತು.ನಿರ್ಜನವಾಗಿದ್ದ ಬೀದಿಗಳನ್ನು ಕಂಡು ಮಂಜನಿಗೆ ಗಾಬರಿಯಾಯಿತು.ಬೇಗಬೇಗ ಹೆಜ್ಜೆ ಹಾಕತೊಡಗಿದ್ದ.ಸ್ವಲ್ಪ ದೂರಬಂದ ಮೇಲೆ ದಾರಿ ಇದ್ದಲ ಎನಿಸಿ,ಹಿಂದಕ್ಕೆ ಮುಖ್ಯರಸ್ತೆಗೆ ಬಂದು ಬೋರ್ ವೆಲ್ ಇದ್ದ ಎಡರಸ್ತೆಗೆ ತಿರುಗಿದ.ಈಗ ಅಲ್ಲಿ ಮೊದಲು ನೋಡಿದ ಅಂಗಡಿ ಮಳಿಗೆಗಳ ಬದಲು ಮಹಡಿ ಮನೆಗಳು ಕಂಡು ಬಂದವು.ಮಂಜನಿಗೆ ಯಾಕೋ ದಾರಿ ಮಸುಕು ಮಸುಕಾಗತೊಡಗಿತ್ತು.ಏನು ಮಾಡಲು ತೋಚದೇ ಅಳುತ್ತಾ ಕಾಲು ತಿರುಗದತ್ತ ಹೆಜ್ಜೆ ಹಾಕತೊಡಗಿದ್ದ.ಮನದಲ್ಲಿ ಅವ್ಯಕ್ತ ಭಯ ಮನೆ ಮಾಡಿತ್ತು.ಅಳುತ್ತಾ ದೇವರಲ್ಲಿ ಮೊರೆಯಿಟ್ಟ.ಮಂಜನ ಕೂಗು ದೇವರಿಗೆ ಕೇಳಿಸಿತ್ತೋ ಏನ್ನೋ?.ದೂರದಲ್ಲಿ ಬಾರಿ ಜನಸಂದಣಿ ನೆರೆದಿತ್ತು.ಪೇಟೇ ಪುರದಮ್ಮನ ದೇವಸ್ಥಾನದ ಅನ್ನ ಸಂತರ್ಪಣೆ ನಡೆಯುತಿತ್ತು.ಸಾಯಂಕಾಲ ಒಂದು ಬನ್ನನ್ನು ತಿಂದ ಮಂಜನಿಗೆ ಹಸಿವು ದಿಡೀರನೇ ಗಮನಕ್ಕೆ ಬಂತು.ಮೊದಲು ಹೊಟ್ಟೆ ತುಂಬಿಸಿ ನಂತರ ಉಳಿದ ವಿಚಾರ ಎಂದು ಕೊಂಡವನೇ ಜನರ ಸಾಲಿನ ಕೊನೆಗೆ ನಿಂತ.ಸಣ್ಣಗೆ ಮಳೆ ಬೀಳಲು ಪ್ರಾರಂಭಿಸಿತು.ಇತ್ತ ಗೌಡರು ಬಾರಿನ ಮಂದ ಬೆಳಕಿನ ಕೆಳಗೆ ಗೆಳೆಯರೊಡನೇ ಕುಡಿಯುತ್ತಾ ಲೋಕವನ್ನೇ ಮರೆತಿದ್ದರು.ಬಾರ್ ಬಾಗಿಲು ಹಾಕುವ ವೇಳೆಗೆ ತೂರಾಡತೊಡಗಿದರು.ಅವರಿಗೆ ಮಂಜನು ಜೊತೆಗೆ ಬಂದದಾಗಲಿ,ಡೀಸೆಲನ ವಿಚಾರವಾಗಲಿ ನೆನಪಾಗುವ ಸ್ಥಿತಿಯಲಿರಲ್ಲಲ್ಲ.ಬಾರಿನಿಂದ ಹೊರಟು ಗೆಳೆಯರನ್ನು ಬೀಳ್ಕೊಟು ತಮ್ಮ ಬೈಕನೇರಿ ಹೊರಟರು.ಕಾಕನ ಕ್ಯಾಂಟಿನ್ ಆ ಹೊತ್ತಿಗೆ ಬಾಗಿಲು ಹಾಕಿತ್ತು.ನಂಜೇಗೌಡರ ಬೈಕು ರಾತ್ರಿಯ ಮೌನಕ್ಕೆ ಅಣಿಯಾಗುತ್ತಿದ್ದ ಪ್ಯಾಟೆಯನ್ನು ಬಿಟ್ಟು ಮೌನವೇ ಮೈದಳೆದಂತಿರುವ ಬೆಟ್ಟದೂರಿನ ಕಡೆಗೆ ಹೊರಟಿತು.ಕಾಫಿತೋಟಗಳ ಮದ್ಯೆ ಹೊರಟ ರಸ್ತೆ.ಕಾಡುಗತ್ತಲೆ.ಭಯಹುಟ್ಟಿಸುವ ಗಾಡಮೌನದ ಮದ್ಯೆ ಯಾರು ಒಬ್ಬಂಟಿಯಾಗಿ ಓಡಾಡುವ ಸಾಹಸ ಮಾಡುವುದಿಲ್ಲ.ಅದು ಅಲ್ಲದೇ ಹಳ್ಳಿಗರ ಹಾರರ್ ಕಥೆಗಳು ಹೆಚ್ಚಾಗಿ ಈ ರಸ್ತೆಯ ಕೆಲವು ಜಾಗಗಳಿಂದ ಪ್ರಾರಂಭವಾಗುವುದು.ನಂಜೇಗೌಡರು ಅದು ಹೇಗೆ ಬೆಟ್ಟದೂರನ್ನು ತಲುಪಿದರೋ ದೇವರೇ ಬಲ್ಲ.ಬಹುಶಃ ಮತ್ತಿನ ಗಮ್ಮತಿರಬಹುದೇನೋ? ಗೌಡರು ಮನೆ ತಲುಪಿ ಬಾಗಿಲನ್ನು ಸವರುತ್ತಾ ಒಳನಡೆದಾಗ ಅದಾಗಲೇ ಮದ್ಯರಾತ್ರಿ ದಾಟಿತು.
ಮಂಜನನ್ನು ಕರೆತರದಿದ್ದ ವಿಷಯ ಸದ್ಯಕ್ಕೆ ಮಂಜನ ತಂದೆ ತಾಯಿಯರಿಗೆ ತಿಳಿಯುವಂತಿರಲಿಲ್ಲ.ಏಕೆಂದರೆ ಮಂಜ ಗೌಡರ ಜೊತೆಗೆ ಬಂದಿದ್ದರೂ,ಗೌಡರ ಮನೆಯಲ್ಲಿ ಮಲಗಿ,ಬೆಳಗಾಗಿ ತನ್ನ ಮನೆಗೆ ಹೋಗುತ್ತಿದ.ಇನ್ನೂ ಗೌಡರ ಮನೆಯಲ್ಲಿ ಮಡದಿ,ಮಕ್ಕಳು ಆಗಲೇ ಮಲಗಿದರು.ನಂಜೇಗೌಡರು ವಾರದಲ್ಲಿ ಒಮ್ಮೆ ಪ್ಯಾಟೆಗೆ ಹೋಗಿ ಬರುವುದು ಖಾಯಂ ಆದಾಗಿನಿಂದ ಮನೆಗೆ ಬರುವುದು ತಡವಾಗುತ್ತಿತ್ತು.ಗೌಡರೇ ಊಟ ಬಡಿಸಿಕೊಂಡು ಮಲಗತಿದ್ದರು.ಹೀಗಾಗಿ ಮಂಜನ ನಾಪತ್ತೆ ಸದ್ಯಕ್ಕೆ ತಿಳಿಯುವಂತಿರಲಿಲ್ಲ.ಬೆಳ್ಳಗೆ ನಂಜೇಗೌಡರ ಮಡದಿ "ಮಂಜ ಎಲ್ಲಿ?,ಬೆಳಿಗೇನೇ ಮನಿಗೋದ್ನಾ?" ಎಂದು ಕೇಳುವವರೆಗೂ ಗೌಡರಿಗೆ ಮಂಜನ ವಿಚಾರ ನೆನಪಾಗಿರಲಿಲ್ಲ.ಈಗ ಓಂದೊಂದಾಗಿ ನೆನಪಾಗತೊಡಗಿ ಅಲ್ಪಸ್ವಲ್ಪ ಇದ್ದ ಅಮಲು ಇಳಿದು ಹೋಯಿತು.
ಅತ್ತ ಮಂಜನ ತಂದೆ ಸಿದ್ದ,ಮಂಜನ ತಾಯಿ ಚಂದ್ರಿ-ಮಂಜ ಬೆಳಗಾಗಿ ಮನೆಗೆ ಬರುವವನು ಯಾಕೆ ಬರಲಿಲ್ಲ ಎಂದು ಅನುಮಾನಗೊಂಡರು.ಇಬ್ಬರು ಬೆಳಗ್ಗೆ ನಂಜೇಗೌಡರ ತೋಟದ ಕೆಲಸಕೆಂದು ಗೌಡರ ಬಂಗಲೆಯ ಬಳಿ ಬಂದರು.ನಂಜೇಗೌಡರು ಏನೂ ಮಾಡಲು ತೋಚದೇ ಸಿದ್ದನಿಗೆ ಏನೆಂದು ಹೇಳುವುದು.ಆ ವಾಚಾಳಿ ಚಂದ್ರಿಯಂತು ವಿಷಯ ತಿಳಿದರೆ ರಂಪ ಮಾಡಿಬಿಡುತ್ತಾಳೆ ಎಂದು ಆತಂಕಗೊಂಡರು.ಆ ವೇಳೆಗೆ ಸಿದ್ದ ಅಂಗಳದಲ್ಲಿ ನಿಂತು 'ಗೌಡ್ರೇ' ಎಂದು ಕೂಗಿದ್ದು ಕೇಳಿಸಿತ್ತು.ನಂಜೇಗೌಡರು ಮನದಲ್ಲಿ ಅಳುಕಿದರೂ ತೋರಿಸಿಕೊಳ್ಳದೇ 'ಏನಾ ಸಿದ್ದ,ಆ ಲೈನ್ ಹಿಂದಗಡೆ ತೋಟ್ದಲ್ಲಿ ಕೆಲ್ಸ ಇಡೀರಿ.ಇನ್ನೊಂದಿಷ್ಟ್ ಆಳನ ಕಳ್ಸ್ತೀನಿ.ಅಮ್ಮೋರ್ ಹತ್ರ ಕಸಿ ಕ್ತಿ ಇಸಕಂಡು ಹೋಗಿ'ಎಂದು ಪ್ರತಿದಿನ ಕೆಲಸ ಹೇಳುವಂತೇ ಹೇಳಿ

ಕಾಮೆಂಟ್‌ಗಳಿಲ್ಲ: