ಬುಧವಾರ, ಏಪ್ರಿಲ್ 18, 2012

ಕಥೆ;ಪ್ಯಾಟೆ6

ನಡೆದು ಬರುವುದು ಕಾಣಿಸಿತು.ಮಂಜ ಸಿದ್ದನನ್ನು ನೋಡಿದನೆಂದು ತೋರುತ್ತದೆ.ಅವನು ಬೇಗಬೇಗ ಹೆಜ್ಜೆಹಾಕುತ್ತಾ ಸಿದ್ದನ ಬಳಿಗೆ ಬಂದ.ಸಿದ್ದ ಮಂಜನನ್ನು ಬಿಗಿದಪ್ಪಿ ಕೆನ್ನೆಗೊಂದು ಸಿಹಿಮುತ್ತನಿತ್ತ.ಅರ್ಚಕರಿಗೆ ಕೈಮುಗಿದು ನಮಸ್ಕರಿಸಿದ ಸಿದ್ದ ನಡೆದ ಸಂಗತಿ ಕೇಳಿ ತಿಳಿದುಕೊಂಡ.ಅರ್ಚಕರಿಗೆ ಕೃತಘ್ಞತೆಯನ್ನು ಸಲ್ಲಿಸಿದ ಸಿದ್ದ ಮಂಜನೊಡನೆ ಬಸ್ಸನೇರಿ ಕುಳಿತ.ನಂಜೇಗೌಡರನ್ನು ಈ ಪೇಟೆಯಲ್ಲಿ ಹುಡುಕಿ ಮಂಜ ಮರಳಿಬಂದ ವಿಚಾರ ತಿಳಿಸುವುದು ಕಷ್ಟವಾಗಿತ್ತು.ಹೇಗಿದ್ದರೂ ಬೆಟ್ಟದೂರಿಗೆ ಬರುತ್ತಾರೆ.ಬಂದಾಗ ಹೇಳಿದರೆ ಆಯ್ತೆಂದು ಸಿದ್ದ ನಿರ್ದರಿಸಿದ್ದ.ಚಂದ್ರಿ ತೋಟದ ಕೆಲಸ ಮುಗಿಸಿ ಮನೆ ಮುಟ್ಟುವುದರೊಳಗೆ,ನಾವು ಮನೆ ಮುಟ್ಟಬೇಕೆಂದು ಮನದಲ್ಲೇ ಅಂದುಕೊಂಡ.ಆ ವೇಳೆಗೆ ಪೇಟೆಯನ್ನು ಬಿಟ್ಟ ಬಸ್ಸು ಬೆಟ್ಟದೂರಿನ ಕಡೆಗೆ ಹೊರಟಿತು.

ಕಾಮೆಂಟ್‌ಗಳಿಲ್ಲ: