ಬುಧವಾರ, ಏಪ್ರಿಲ್ 18, 2012

ಕಥೆ;ಪ್ಯಾಟೆ5

'ಚಂದ್ರಿ ನೀನು ಬಾಕಿ ಆಳಿನ ಜೊತಿಗೆ ತೋಟುಕ್ಕೆ ಹೋಗಿರು,ಸಿದ್ದುಂಗೇ ಮನೆತವ ಸ್ವಲ್ಪ ಕೆಲಸ ಅದೆ' ಎಂದರು.ನಡೆದದೇನು ತಿಳಾಯದ ಚಂದ್ರಿ ಮಂಜನನ್ನು ಬಂಗಲೆಗೆ ಹಾಲು ತರಲು ಕಳಿಸಿರಬೇಕೆಂದು ಅಂದುಕೊಂಡು ಹೆಣ್ಣಾಳಿನ ಜೊತೆ ತೋಟಕ್ಕೇ ಹೋದಳು.ಇತ್ತ ಸಿದ್ದ 'ಗೌಡ್ರೇ ಮಂಜ ಎಲ್ಲಿ?.ಹಾಲ್ ತರಕೆ ಕಳ್ಸೀರಾ?'ಎಂದು ಕೇಳಿದ.ಅದಕ್ಕೆ ನಂಜೇಗೌಡರು ತಡವರಿಸಿದರು.ಅಳುಕಿನಿಂದಲೇ 'ಲೋ ಸಿದ್ದ ಏನಂಥ ಹೇಳ್ಲೋ,ನಿನ್ನೇ ಪ್ಯಾಟಿಗೆ ಹೋದ ಮೇಲೆ ಅಲ್ಲಿ ಕ್ಯಾಂಟಿನ್ ತವ ಕೂರ್ಸಿ,ಎಲ್ಲೂ ಹೋಗಬೇಡ ಅಂತ ಹೇಳಿ ಡಿಸೇಲ್ ತರಕ್ಕೆ ಅಂಥ ಹೋದನಾ.ಬಂದು ನೊಡ್ತೀನಿ,ಮಂಜ ಇಲ್ಲ.ನನಗೆ ಗಾಬರಿಯಾಗಿ ಇಡೀ ಪ್ಯಾಟಿಯೆಲ್ಲ ಹುಡ್ಕಿದ್ರುವೇ ಕಾಣ್ಸಿಸ್ಲಿಲ್ಲ ಕಣಾ,ಏನ್ ಮಾಡಕ್ಕೂ ತೋಚದೇ ಅಂಗೇ ಬಂದುಬುಟ್ಟೆ.ಚಂದ್ರಿ ತವ ಹೇಳಕ್ಕೇ ದೈರ್ಯ ಸಾಲ್ಲಿಲ್ಲ.ಅದುಕ್ಕೆ ತೋಟಕ್ಕೆ ಕಳ್ಸಿ ನಿನಗೆ ಹೇಳಿದು' ಎಂದು ಒಂದು ದೀರ್ಘ ನಿಟ್ಟುಸಿರು ಬಿಟ್ಟರು.ಸಿದ್ದ 'ಏನ್ ಗೌಡ್ರೇ ಹಿಂಗ್ ಹೇಳಬುಟ್ರಿ,ಚಂದ್ರಿಗೇನಾರ ಗೊತ್ತಾಗುಬುಟ್ರೆ ಅಷ್ಟೇಯಾ?.ಮಂಜ ಪ್ಯಾಟೆ ಗೀಟೆಗೆಲ್ಲ ಹೋದೋನೆ ಅಲ್ಲ.ಗೌಡ್ರೇ, ನೀವೇ ಹೆಂಗಾರ ಮಾಡಿ ಮಗಿನಾ ಹುಡುಕ್ಸಿ ಕೊಟ್ಟುಬುಡಿ.ನಿಮ್ಮ ದಮ್ಮಯ್ಯ ಅಂತೀನಿ'ಎಂದು ಆತಂಕದಿಂದ ಗೌಡರಿಗೆ ಕೈ ಮುಗಿದ.ಅದಕ್ಕೆ ಗೌಡರು 'ನಡಿ ಪ್ಯಾಟೇಗ್ ಹೋಗನ.ಪೋಲಿಸ್ ಕಂಪ್ಲೇಟ್ ಕೊಟ್ಟು ಬರನ.ನಿನ್ ತವ ಮಂಜಂದು ಪೋಟ ಏನಾರ ಇದ್ರೆ ತಗಂಡು ಬಾ ಇಲ್ಲಿಗೆ.ನಾನು ಅಷ್ಟೋತಿಗೆ ಹೊರಟೀರ್ತೀನಿ'ಎಂದರು.ಸಿದ್ದ ಬೇಗನೇ ಹೋಗಿ ಪ್ರೇಮು ಕಟ್ಟಿಸಿ ಗೋಡೆಗೆ ನೇತು ಹಾಕಿದ ಹೊಗೆ ಹಿಡಿದು ಮಬ್ಬಾಗಿದ ಪೋಟೊವನ್ನು ತಂದ.ನಂಜೇಗೌಡರು ಸಿದ್ದ ಬಂದೊಡನೆ ಕೈನಲ್ಲಿದ್ದ ಹಣ್ಣುಕಾಯಿಯ ಕವರನ್ನು ಹಿಡಿದುಕೊಳ್ಳಲು ಕೊಟ್ಟು,ಬೈಕಿನಲ್ಲಿ ಸಿದ್ದನೊಡನೆ ಹೊರಟರು.ದಾರಿಯಲ್ಲಿಸಿಗುವ ದೇವಿರಮ್ಮನ ದೇವಸ್ಥಾನದ ಬಳಿ ಬೈಕು ನಿಲ್ಲಿಸಿ ಒಳನಡೆದರು.ಸಿದ್ದನು ಗೌಡರನ್ನು ಅನುಸರಿಸಿದನು.ಪುರಾತನವಾದ ದೇವಸ್ಥಾನ.ಗೌಡರು,ಮಂಜ ಸುರಕ್ಷಿತವಾಗಿ ಬಂದರೆ ನೂರೊಂದು ಕಾಯಿ ಹೊಡೆಯುವುದಾಗಿ ಬೇಡಿಕೊಂಡರು.ನಂತರ ಇಬ್ಬರು ಪ್ರಸಾದ ಸ್ವೀಕರಿಸಿ ಪ್ಯಾಟೆಯ ಕಡೆ ಬೈಕಿನಲ್ಲಿ ಹೊರಟರು.ಅತ್ತ ದೇವಸ್ಥಾನದ ಜಗಲಿಯ ಮೇಲೆ ಮಲಗಿದ ಮಂಜನನ್ನು ಯಾರೋ ಎಬ್ಬಿಸಿದರು.ಮಂಜ ತನ್ನ ನಿದ್ದೆಗಣ್ಣನ್ನು ಬಲವಂತವಾಗಿ ತೆರೆದು ನೋಡಿದ.ಎದುರಿಗೆ ದೇವಸ್ಥಾನದ ಭಟ್ಟರು ನಿಂತಿದರು.ಮಂಜ ಹಿಂದಿನ ರಾತ್ರಿ ನಡೆದದ್ದನ್ನೆಲ್ಲಾ ಭಟ್ಟರಿಗೆ ಹೇಳಿದ.ಭಟ್ಟರು ಬೆಳಗಾಗಿ ಎದ್ದು ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಬರುವುದಾಗಿ ಭರವಸೆಯನ್ನು ನೀಡಿದ್ದರು.ಅತ್ತ ನಂಜೇಗೌಡರ ಬೈಕು ನಖರ ಪೋಲಿಸ್ ಠಾಣೆಟ ಎದುರು ನಿಂತಿತ್ತು.ನಂಜೇಗೌಡರು ಪೋಲಿಸರಿಗೆ ದೂರು ಬರೆದು,ಮಂಜನ ಪೋಟೋವನ್ನು ಕೊಟ್ಟು ಆದಷ್ಟು ಬೇಗ ಹುಡುಕಿಕೊಡಬೇಕಾಗಿ ಕೇಳಿಕೊಂಡರು.ಪೋಲಿಸ್ ಠಾಣೆಯಿಂದ ಹೊರಬಂದ ನಂಜೇಗೌಡರು ಸಿದ್ದನನ್ನು ಅಲ್ಲೇ ಇರಲು ಹೇಳಿ ಗೆಳೆಯರು ಸಿಕ್ಕರೆ ಅವರಿಗೂ ಮಂಜನನ್ನು ಹುಡುಕಲು ಹೇಳಬಹುದೆಂದು ಎತ್ತಲ್ಲೋ ಹೊರಟುಹೋದರು.ಸಿದ್ದ ಪೋಲಿಸ್ ಠಾಣೆಯ ಹೊರಭಾಗದ ಕಟ್ಟೆಯ ಮೇಲೆ ಕುಳಿತು ಬೀಡಿ ಹಚ್ಚಿಕೊಂಡು ಯೋಚಿಸುತ್ತಾ ಹೊಗೆ ಬಿಡತೊಡಗಿದ.ಸಿದ್ದನಿಗೆ ಮಕ್ಕಳನ್ನು ಅಪಹರಿಸಿ ಅಂಗಾಂಗಗಳನ್ನು ತೆಗೆಯುವವರು,ಮಕ್ಕಳನ್ನು ಬಲಿಕೊಡುವ ಭಯಂಕರ ಕ್ರೂರ ಮಾಂತ್ರಿಕರ ಚಿತ್ರ ಕಣ್ಮಂದೆ ಸುಳಿದು ಆತಂಕ ಹೆಚ್ಚಾಯಿತು.ಮನದಲ್ಲೇ ನಂಜೇಗೌಡರ ತೋಟದ ದೈವ ಭೂತಪ್ಪನನ್ನು ನೆನೆದು ನನ್ನ ಮಗ ಸುರಕ್ಷಿತವಾಗಿ ಹಿಂದುರುಗಿದರೆ ಕೋಳಿಯನ್ನು ಬಲಿಕೊಡುವುದಾಗಿ ಬೇಡಿಕೊಂಡ.ಅದೇ ಗುಂಗಿನಲ್ಲಿ ಸೇದುತ್ತಿರುವ ಬೀಡಿಯ ತುಂಡನ್ನು ಎಸೆದು ಮತ್ತೊಂದು ಬೀಡಿ ಹಚ್ಚಿಕೊಂಡು ಎಳೆದು ಎಳೆದು ಸುರುಳಿ,ಸುರುಳಿಯಾಗಿ ಹೊಗೆ ಬಿಡತೊಡಗಿದ.ಸಿದ್ದನಿಗಿದ್ದ ಮತ್ತೊಂದು ಚಿಂತೆಯೆಂದರೇ ಚಂದ್ರಿಗೆ ಹೇಗೆ ವಿಷಯ ತಿಳಿಸುವುದೆಂಬುದು.ಒಂದು ವೇಳೆ ವಿಷಯ ತಿಳಿದರೆ ಅದರ ಪರಿಣಾಮ ಹೀಗೆ ಇರುವುದೆಂದು ಹೇಳಲಾಗುವುದಿಲ್ಲ.ಯಾಕೆಂದರೆ ಹಿಂದೆ ಚಂದ್ರಿಯ ರೌದ್ರವತಾರದ ದರ್ಶನ ಸಿದ್ದನಿಗೆ ಆಗಿತ್ತು.ಹಿಂದೊಮ್ಮೆ ಸಿದ್ದ,ಪಕ್ಕದ ಹಳ್ಳಿಗೆ ಕಳ್ಳಭಟ್ಟಿ ಕುಡಿಯಲು ಹೋಗಿದ್ದ.ಪ್ಯಾಕೆಟ್ ಸಾರಾಯಿಯ ಮಾರಾಟ ಸರ್ಕಾರ ನಿಲ್ಲಿಸಿದ ಮೇಲೆ ಭಟ್ಟಿ ಸಾರಾಯಿಯೇ ಸಿದ್ದನಂಥಹ ಬಡವರ್ಗದ ಕುಡುಕರಿಗೆ ಅನಿವಾರ್ಯವಾಯಿತು.ಕಳ್ಳಭಟ್ಟಿಯಕುಡುಕ ಗ್ರಾಹಕರ ಸಂಖ್ಯೇ ಹೆಚ್ಚಾದಂತೇ,ಎಲ್ಲೋ ಒಂದೋ ಎರಡೋ ಮನೆಯಲ್ಲಿದ್ದ ಕಳ್ಳಭಟ್ಟಿ ವ್ಯಾಪಾರ ಎರಡು ಮನೆಗೊಂದರಂತೇ ಪ್ರಾರಂಭವಾಯಿತು.ಸಣ್ಣಪುಟ್ಟ ಗೂಡಂಗಡಿಗಳೆಲ್ಲ ಮಿನಿಬಾರುಗಳಂತೇ ತೋರತೊಡಗಿದವು.ಬೆಟ್ಟದೂರಿನ ಮಹಮದ್ ಕಾಕನ ಅಂಗಡಿಯ ಪ್ಲಾಸ್ಟಿಕ್ ಕೊಡಗಳೆಲ್ಲ ಹೇಳಹೆಸರಿಲ್ಲದಂತೇ ಖರ್ಚಾಗಿ ಹೋಯಿತು.ಅದರ ಜೊತೆಗೆ ಕಪ್ಪುಬೆಲ್ಲದ ವ್ಯಾಪಾರ ಭರ್ಜರಿಯಾರಿ ನಡೆಯತೊಡಗಿತ್ತು.ಜೀಪುಕಾರುಗಳನ್ನೇ ಕಂಡಿರದ ಬೆಟ್ಟದೂರಿನ ರಸ್ತೆಯಲ್ಲಿ ಈಗ ದಿನಕ್ಕೊಂದು ಐದಾರು ಬಾರಿ ಕಳ್ಳಭಟ್ಟಿ ಹಿಡಿಯುಲ ಸ್ಕ್ವಾಡಿನ ಜೀಪುಗಳು ಓಡಾಡತೊಡಗಿದವು.ಈ ವಾತಾವರಣ ಇದ್ದಾಗಲೇ ಸಿದ್ದ ಕಳ್ಳಭಟ್ಟಿ ತರಲೆಂದು ಹೋಗಿದ್ದು.ಸಿದ್ದ ಕಳ್ಳಭಟ್ಟಿಯ ಶೀಶೆಯನ್ನು ಜೇಬಿನಲ್ಲಿಟ್ಟುಕೊಂಡು ರಸ್ತೆಬದಿ ನಡೆದು ಬರುವಾಗ ಸ್ಕ್ವಾಡಿನ ಜೀಪು ರಸ್ತೆಯ ಪಕ್ಕ ನಿಂತಿರುವುದು ಕಂಡಿತು.ಯಾವುದೇ ಯೋಚನೆಯಲ್ಲಿದ್ದ ಸಿದ್ದ ಜೀಪಿಗೆ ಒರಗಿ ನಿಂತ ಸ್ಕ್ವಾಡಿನವನನ್ನು ಗಮನಿಸಲಿಲ್ಲ.ಆದರೆ ಸಿದ್ದನ ಜೇಬಿನ ಗಳಕ್ ಗಳಕ್ ಶಬ್ಧ ಸ್ಕ್ವಾಡಿನವನನ್ನು ಆಕರ್ಷಿಸಿ,ಸಿದ್ದನಿಗೇ ನಿಲ್ಲಲು ಹೇಳಿದ.ಸಿದ್ದ ಮುಂದೆ ನಡೆದರೆ ಬಾಟಲಿಯ ಶಬ್ಥ ಕೇಳಬಹುದೆಂದು ದೂರಕ್ಕೆ ನಿಂತ.ಸ್ಕ್ವಾಡಿನವನು ಸಿದ್ದನನ್ನು ಜೀಪು ಹತ್ತಲೂ ಹೇಳಿ,ಇತರ ಸಂಗಡಿಗರ ಬರುವಿಕೆಗಾಗಿ ಕಾಯುತ್ತಾ ಜೀಪಿನಲ್ಲಿ ಕುಳಿತ.ಇತ್ತ ಯಾರಿಂದಲೋ ವಿಷಯ ತಿಳಿದ ಚಂದ್ರಿ,ಎದ್ದನ್ನೋ ಬಿದ್ದೆನ್ನೋ ಎಂದು ಜೀಪಿನೆಡೆಗೆ ಬಂದಳು.ಬರುವಾಗ ಬಡಿಗೆ ಹಿಡಿದು ತಯಾರಾಗೇ ಬಂದಿದ್ದಳು.ಬಾಯಿ ತುಂಬ ಇದ್ದ ಎಲೆಅಡಿಕೆ ಉಗಿದು,ಜೀಪಿಗೆ ಒರಗಿ ನಿಂತು ಸಿಗರೇಟು ಸೇದುತ್ತಿದ ಸ್ಕ್ವಾಡಿನವನನ್ನು ಎಳೆದು ಕೆಳಗೆ ಹಾಕಿ ಬಾರಿಸತೊಡಗಿದಳು.'ಬ್ಯಾರಲ್ ಗಟ್ಟಲೇ ತುಂಬಿಸಿ ಇಟ್ಕಂಡಿರೋ ಕಳ್ಳಭಟ್ಟಿ ಇಡಿಯದ್ ಬುಟ್ ಬುಟ್ಟು.ಇಲ್ಲಿ ಬೀದಿಲ್ಲಿ ಹೋಗ್ಬರೋಗೆಲ್ಲ ಅಡ್ಡಹಾಕಿ ತೊಂದರೆ ಕೊಡ್ತೀಯಾ'ಎಂದು ಚಂದ್ರಿ ಬೈಯತೊಡಗಿದಳು.ಸಿದ್ದ,ಚಂದ್ರಿಯ ರೌದ್ರವತಾರವನ್ನು ಕಂಡು ಚಂದ್ರಿಯನ್ನು ಅಲ್ಲಿಂದ ಕರೆದುಕೊಂಡು ಹೋದ.ಸಿದ್ದ ಪೋಲಿಸ್ ಸ್ಟೇಷನಿನ ಹೊರಗೆ ಹೀಗೆ ಯೋಚಿಸುತ್ತಾ ಕುಳಿತವನು,ಸೇದುತ್ತಿದ್ದ ಬೀಡಿಯ ಬೆಂಕಿ ಕೈಗೆ ತಗುಲಿದಾಗ ಯೋಚನೆಯಿಂದ ಹೊರಬಂದ.ಆ ವೇಳೆಗೆ ನಂಜೇಗೌಡರು ಬಂದರು.ಸಿದ್ದನ ಕೈಗೆ ಸ್ವಲ್ಪ ಹಣವನ್ನು ಕೊಟ್ಟು ಬಸ್ ನಲ್ಲಿ ಹೋಗಬೇಕೆಂದು ನಾನು ಸ್ವಲ್ಪ ಕೆಲಸ ಮುಗಿಸಿಕೊಂಡು ಮತ್ತೆ ಬರುತ್ತೇನೆಂದು ಹೇಳಿ ಬೈಕಿನಲ್ಲಿ ಬಸ್ ನಿಲ್ದಾಣದ ಬಳಿ ಇಳಿಸಿ ಹೋದರು.ಬೆಟ್ಟದೂರಿಗೆ ಹೋಗುವ ಹಸಿರು ಬಣ್ಣದ ಮಾರುತಿ ಬಸ್ಸು ಆಗಲೇ ಬಂದು ನಿಂತಿತ್ತು.ಬಸ್ಸು ಹೊರಡಲು ಇನ್ನೂಹಾಕಷ್ಟು ಸಮಯವಿತ್ತು.ಸಿದ್ದ ಬಸ್ಸಿನಿಂದ ಸ್ವಲ್ಪ ದೂರಕ್ಕೆ ಹೋಗಿ ಮರೆಯಲ್ಲಿ ನಿಂತು ಬೀಡಿಸೇದತೊಡಗಿದ.
ಚಂದ್ರಿಗೆ ಏನೆಂದು ಹೇಳುವುದು ಎನ್ನುವುದು ಸಿದ್ದನಿಗೆ ತೋಚಲಿಲ್ಲ.ಚಂದ್ರಿಗೆ ವಿಷಯ ತಿಳಿದರೆ ಅದೆಷ್ಟು ನೊಂದುಕೊಳ್ಳತ್ತಾಳೋ.ಏನು ರಂಪ ಮಾಡಿ ಬಿಡುತ್ತಾಳೋ ಎನ್ನುವುದು ಊಹಿಸಲು ಸಾಧ್ಯವಿರಲಿಲ್ಲ.ಅದೇ ಗುಂಗಿನಲ್ಲಿ ಬಾಡಿದ ಮುಖಭಾವದಿಂದ ಸುತ್ತಲ್ಲ ದೃಶ್ಯವನ್ನು ಯಾಂತ್ರಿಕವಾಗಿ ನೋಡುತ್ತಾ ನಿಂತ.ಹಾಗೇ ನೋಡುತಿರುವಾಗಲೇ ದೂರದಲ್ಲಿ ಮಂಜನಂತೇ ತೋರುವ ಆಕಾರವೊಂದು ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆದು ಬರುತ್ತಿರುವಂತೇ ತೋರಿತು.ಸೇದುತ್ತಿದ್ದ ಬೀಡಿಯನ್ನು ಎಸೆದು ಸಿದ್ದ,ಆ ಕಡೆಗೆ ಹೆಜ್ಜೆ ಹಾಕತೊಡಗಿದ.ಹತ್ತಿರ ಹತ್ತಿರವಾಗುತ್ತಿದಂತೇ ಆಕಾರ ಸ್ಪಷ್ಟವಾಗಿ ಮಂಜ,ಪೇಟೆ ದೇವಿರಮ್ಮನ ಅರ್ಚಕರೊಡನೆ

ಕಾಮೆಂಟ್‌ಗಳಿಲ್ಲ: